ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಿಲುಕಿ, ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದ ಧಾರವಾಡ ಜಿಲ್ಲೆಯ ಕುಂದಗೊಳ ತಾಲೂಕಿನ ಬೆಟದೂರಿನ ಯೋಧ ಲ್ಯಾನ್ಸ್ನಾಯಕ್ ಹನುಮಂತಪ್ಪ ಕೊಪ್ಪದ್ ಅವರು ಗುರುವಾರ ಹುತಾತ್ಮರಾಗಿದ್ದಾರೆ.
ಇಡೀ ದೇಶ ಈಗ ವೀರ ಯೋಧ ಕನ್ನಡಿಗ ಹನುಮಂತಪ್ಪ ಅವರನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದೆ. ಇಂತಹ ಸಂದರ್ಭದಲ್ಲಿ ಇತರ 9 ಸಿಯಾಚಿನ್ ಹೀರೋಗಳನ್ನು ನೆನಪಿಸಿಕೊಳ್ಳೊಣ...
ಮೂವರು ಕನ್ನಡಿಗರು ಸೇರಿದಂತೆ ಸಿಯಾಚಿನ್ ಹಿಮಪಾತದಲ್ಲಿ ದೇಶದ 10 ಯೋಧರು ಸಾವನ್ನಪ್ಪಿದ್ದಾರೆ.