ಈ ಬಗ್ಗೆ ವಿಧಾಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಸಿದ ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಅವರು, ವಾಚ್ ವಿಚಾರ ದೊಡ್ಡದೇನಲ್ಲ. ಸಂಪುಟದ ಎಲ್ಲಾ ಸಚಿವರು ಅವರ ಜೊತೆ ಇದ್ದೇವೆ ಎಂದರು. ಅಲ್ಲದೆ ಸಿಎಂ ವಾಚ್ ಹರಾಜು ಹಾಕುವ ಬಗ್ಗೆ ಸುಳಿವು ನೀಡಿದ ಸಚಿವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ವಿಚಾರದಲ್ಲಿ ಜನರು ಮೆಚ್ಚುವ ನಿರ್ಣಯ ಕೈಗೊಳ್ಳಲಿದ್ದಾರೆ' ಎಂದು ಹೇಳಿದರು.