ನಾಗಪಟ್ಟಣಂ: ಭಾರತೀಯ ಕರಾವಳಿ ಕಾವಲು ಪಡೆ ಶ್ರೀಲಂಕಾದ 9 ಮೀನುಗಾರರನ್ನು ಬಂಧಿಸಿದ್ದು ಯಂತ್ರಚಾಲಿತ ದೋಣಿಗಳನ್ನು ವಶಪಡಿಸಿಕೊಂಡಿದೆ.
ಅಂತಾರಾಷ್ಟ್ರೀಯ ಕಡಲು ಗಡಿ ರೇಖೆಯನ್ನು ಉಲ್ಲಂಘಿಸಿದ ಕಾರಣ ಮೀನುಗಾರರನ್ನು ಬಂಧಿಸಲಾಗಿದೆ. ಕರಾವಳಿ ಕಾವಲು ಪಡೆ ಮಾಹಿತಿ ಪ್ರಕಾರ, ಭಾರತೀಯ ಕರಾವಳಿ ಪ್ರದೇಶಕ್ಕೆ ಪ್ರವೇಶಿಸಿದ್ದ ಶ್ರೀಲಂಕಾ ಮೀನುಗಾರರು, ನಾಗಪಟ್ಟಣಂ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು.
2,500 ಕೆಜಿಯಷ್ಟು ಅಕ್ರಮ ಬೇಟೆಯನ್ನು ಭಾರತಿಯ ಕರಾವಳಿ ಕಾವಲು ಪಡೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಫೆ.25 ರಂದು ಕಾರೈಕಾಲ್ ಬಂದರಿಗೆ ಬಂಧಿತ ಮೀನುಗಾರರನ್ನು ಕರೆತರಲಾಗುತ್ತದೆ.
Advertisement