ಎಸ್.ಆರ್.ನಾಯಕ್ ಈಗಾಗಲೇ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದಾರೆ. ಅವರನ್ನು ಏಕಾಏಕಿ ಲೋಕಾಯುಕ್ತರ ಹುದ್ದೆಗೆ ನೇಮಿಸಿದರೆ, ಅವರ ಸೇವೆಯನ್ನು ಅಲ್ಲಿ ದಿಢೀರ್ ಮೊಟಕು ಮಾಡಿದಂತಾಗುತ್ತದೆ. ನಂತರ ಅವರಿದ್ದ ಆಯೋಗಕ್ಕೆ ಹೊಸಬರ ಹುಡುಕಾಟ ಆರಂಭಿಸಬೇಕಾಗುತ್ತದೆ. ಹಾಗೆಯೇ ಲೋಕಾಯುಕ್ತಕ್ಕೆ ಸಿಕ್ಕಿರುವ ಅರ್ಹರನ್ನು ಕೈ ಬಿಟ್ಟಂತಾಗುತ್ತದೆ. ಹೀಗಾಗಿ ಲೋಕಾಯುಕ್ತ ನೇಮಕ ವೇಳೆ ಭಾಷೆ ನೋಡುವುದು ಸರಿಯಲ್ಲ ಎನ್ನುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ.