ಬಾಲ್ಯದಲ್ಲಿ ನಾನು ಸಾವಿನ ಸಮೀಪಕ್ಕೆ ಹೋಗಿದ್ದ ಅನುಭವವಾಗಿತ್ತು: ಸಚಿನ್ ತೆಂಡೂಲ್ಕರ್

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌‌ಗೆ ಬಾಲ್ಯದಲ್ಲಿ ಸಾವಿಗೆ ಸಮೀಪವಾಗಿದ್ದ ಅನುಭವ ಆಗಿತ್ತಂತೆ. ಅದಕ್ಕೆ ಸಂಬಂಧಿಸಿದ ಘಟನೆಯ ...
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ನವದೆಹಲಿ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌‌ಗೆ ಬಾಲ್ಯದಲ್ಲಿ ಸಾವಿಗೆ ಸಮೀಪವಾಗಿದ್ದ ಅನುಭವ ಆಗಿತ್ತಂತೆ. ಅದಕ್ಕೆ ಸಂಬಂಧಿಸಿದ ಘಟನೆಯ ಅನುಭವವೊಂದನ್ನು ಅವರು ಬಿಚ್ಚಿಟ್ಟಿದ್ದಾರೆ.

ಅವರ ಮುಂಬೈನ ಶಾಲಾ ದಿನಗಳಲ್ಲಿ ಕ್ರಿಕೆಟ್ ಅಭ್ಯಾಸದ ಬಳಿಕ ಊಟ ಮುಗಿಸಿ ಸಿನಿಮಾ ನೋಡೋದಕ್ಕೆ 6 ಮಂದಿ ಗೆಳೆಯರ ಜೊತೆ ಹೋಗುತ್ತಿದ್ದರು. ಸಿನಿಮಾ ನೋಡಿಕೊಂಡು ವಾಪಸ್ ಬರುವ  ವೇಳೆ ಮೈದಾನಕ್ಕೆ ಹಿಂದಿರುಗಲು ದಾದ್ರಾದ ರೈಲು ಹಳಿ ದಾಟುತ್ತಿದ್ದರು.

ಹಳಿ ದಾಟುತ್ತಿದ್ದಾಗ  ರೈಲು ವೇಗವಾಗಿ ಬಂದಿತ್ತು. ಇದರಿಂದ ನನಗೆ ಭಾರೀ ಭಯವಾಗಿತ್ತು. ಆಗ ನನಗೆ ಸಾವಿನ ಅನುಭವವಾಗಿತ್ತು ಎಂದು ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.

ಪ್ರತಿ ಭಾರಿ ರೈಲು ಹಳಿ ನೋಡಿದಾಗ ನನಗೆ ಅದೇ ಘಟನೆ ಮರುಕಳಿಸುತ್ತಿರುತ್ತದೆ ಎಂದು ಹೇಳಿರುವ ಸಚಿನ್ ತೆಂಡೂಲ್ಕರ್ ರೈಲಿನಲ್ಲಿ ಸಂಚರಿಸುವಾಗ ಜಾಗೃತೆಯಿಂದ ಇರಬೇಕು ಎಂದು ಹೇಳಿದ್ದಾರೆ. ಜೊತೆಗೆ ರೈಲಿನ ಮೇಲೆ ಕುಳಿತು ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕೆಂದು ಅವರು ಪ್ರಯಾಣಿಕರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com