ಮಾಧ್ಯಮಗಳಲ್ಲಿ ಈ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕಪಾಳಮೋಕ್ಷ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಾನು ಕಪಾಳಮೋಕ್ಷ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಅಲ್ಲದೇ ಸ್ವತಃ ಪಾಲಿಕೆ ಆಯುಕ್ತ ರಮೇಶ್ ಅವರು ಕೂಡಾ, ತನಗೆ ಸಿಎಂ ಕಪಾಳಮೋಕ್ಷ ಮಾಡಿಲ್ಲ. ಬದಿಗೆ ಸರಿದುಕೊಳ್ಳಿ ಎಂದು ಹೇಳಿರುವುದಾಗಿ ತಿಳಿಸಿದ್ದರು.