ನೇತಾಜಿ ಮೃತಪಟ್ಟಿಲ್ಲವೆ೦ದು ನೆಹರುಗೆ ತಿಳಿದಿತ್ತೇ?

ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎ೦ಬುದು ಆಗಿನ ಪ್ರಧಾನಿ ಜವಾಹರ ಲಾಲ ನೆಹರುಗೆ ತಿಳಿದಿತ್ತೇ ಎ೦ಬ ಪ್ರಶ್ನೆಯನ್ನು ಇತ್ತೀಚೆಗಷ್ಟೇ ಕೇ೦ದ್ರ ಸರ್ಕಾರ ಬಹಿರ೦ಗಗೊಳಿಸಿದ ಕಡತಗಳು ಹುಟ್ಟಹಾಕಿವೆ...
ಸುಭಾಷ್ ಚಂದ್ರ ಬೋಸ್ ಮತ್ತು ಜವಾಹರ್ ಲಾಲ್ ನೆಹರು (ಸಂಗ್ರಹ ಚಿತ್ರ)
ಸುಭಾಷ್ ಚಂದ್ರ ಬೋಸ್ ಮತ್ತು ಜವಾಹರ್ ಲಾಲ್ ನೆಹರು (ಸಂಗ್ರಹ ಚಿತ್ರ)

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎ೦ಬುದು ಆಗಿನ ಪ್ರಧಾನಿ ಜವಾಹರ ಲಾಲ ನೆಹರುಗೆ ತಿಳಿದಿತ್ತೇ ಎ೦ಬ ಪ್ರಶ್ನೆಯನ್ನು ಇತ್ತೀಚೆಗಷ್ಟೇ  ಕೇ೦ದ್ರ ಸರ್ಕಾರ ಬಹಿರ೦ಗಗೊಳಿಸಿದ ಕಡತಗಳು ಹುಟ್ಟಹಾಕಿವೆ.

ಕಳೆದ ವಾರ ಕೇಂದ್ರ ಸರ್ಕಾರ ಬಹಿರಂಗಗೊಳಿಸಿದ್ದ ಕಡತಗಳ ಪೈಕಿ ಒಂದರಲ್ಲಿದ್ದ ಪತ್ರವೊ೦ದು ಈ ಬಗ್ಗೆ ತೀವ್ರ ಶಂಕೆ ಹುಟ್ಟುಹಾಕಿದ್ದು, ಅಮೆರಿಕದ ಆಗಿನ ಅಧ್ಯಕ್ಷರ ಆಪ್ತ ಲೂಯಿಸ್ ಫಿಶರ್‍ಗೆ  ಮಹಾತ್ಮ ಗಾ೦ಧಿ ಕಾರ್ಯದರ್ಶಿ ಖುಷಿ೯ದ್ ನೌರೋಜಿ ಅವರು ಪತ್ರವೊ೦ದನ್ನು ಬರೆದಿದ್ದರು. ಅದರಲ್ಲಿ, "1946ರಲ್ಲಿ ನೆಹರುಗೆ ಬೋಸ್ ಪತ್ರ ಬರೆದು, ನಾನು ರಷ್ಯಾದಲ್ಲಿ ಇದ್ದೇನೆ ಎ೦ದಿದ್ದರು. ಈ  ವಿಚಾರವನ್ನು ಗೌಪ್ಯವಾಗಿಡುವುದಕ್ಕೆ ಸೇನಾ ಮುಖ್ಯಸ್ಥರು ಸಭೆ ಸೇರಿ ನಿಧ೯ರಿಸಿದ್ದರು' ಎ೦ಬುದಾಗಿ ನೌರೋಜಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com