ಅಸ್ಸಾಂ ಅಭಯಾರಣ್ಯದಲ್ಲಿ ಮೂರನೆ ರೈನೊ ಬೇಟೆ

ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋ ಒಂದನ್ನು ಕೊಂದಿದ್ದು, ೨೦೧೬ ರಲ್ಲಿ ಬೇಟೆಯಾಡಿದ ರೈನೊಗಳ ಸಂಖ್ಯೆ ಮೂರಕ್ಕೆ ಏರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗೌಹಾಟಿ: ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋ ಒಂದನ್ನು ಕೊಂದಿದ್ದು, ೨೦೧೬ ರಲ್ಲಿ ಬೇಟೆಯಾಡಿದ ರೈನೊಗಳ ಸಂಖ್ಯೆ ಮೂರಕ್ಕೆ ಏರಿದೆ.

ಈ ಬೇಟೆಗಾರರು ಘೇಂಡಾಮೃಗದ ಕೊಂಬನ್ನು ಕದ್ದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ೪೮ ಘಂಟೆಗಳ ಅವಧಿಯಲ್ಲಿ ನಡೆದ ಎರಡನೇ ಬೇಟೆ ಇದಾಗಿದೆ.

"ಬರ್ಹಾಪಹಾರ್ ಶ್ರೇಣಿಯಲ್ಲಿ ಸುಮಾರು ರಾತ್ರಿ ೧೨:೩೦ಕ್ಕೆ ಗುಂಡಿನ ಶಬ್ದ ಕೇಳಿ ಬಂದಿದ್ದು, ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಆದರೆ ಅರಣ್ಯ  ಸಿಬ್ಬಂದಿಗೆ ಬುಧವಾರ ಘೇಂಡಾಮೃಗದ ಕಳೇಬರ ಮಾತ್ರ ಸಿಕ್ಕಿದೆ ಮತ್ತು ಕೊಂಬು ಕಾಣೆಯಾಗಿದೆ" ಎಂದು ಅಭಯಾರಣ್ಯದ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com