ಅಹಮದಾಬಾದ್: ಗುಜರಾತ್ ನ ಸೌರಾಷ್ಟ್ರದ ಉನಾ ತಾಲ್ಲೂಕಿನಲ್ಲಿ ಗೋರಕ್ಷಕ ಸಮಿತಿಯ ಕೆಲವರು ಸತ್ತ ಗೋವಿನ ಚರ್ಮವನ್ನು ಸಾಗಿಸುತ್ತಿದ್ದ ನಾಲ್ವರು ದಲಿತ ಯುವಕರನ್ನು ಥಳಿಸಿ ದೌರ್ಜನ್ಯವೆಸಗಿದ್ದ ಪ್ರಕಾರಣದಲ್ಲಿ ಗುಜರಾತ್ ನಾದ್ಯಂತ ನೆನ್ನೆ ಮತ್ತು ಇಂದು ಪ್ರತಿಭಟನೆಗಳಾಗಿದ್ದವು. ಇಂದು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹಾಯದ ಭರವಸೆ ನೀಡಿದ್ದಾರೆ.