ದೇಶಕ್ಕೆ ಅಗೌರವ ತೋರಿದವರ ಶಿರಚ್ಛೇದ ಮಾಡುತ್ತೇವೆ: ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ

ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತ್ರಿಕಾರಿ ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ ಮೊಮ್ಮಗ ದೇಶವಿರೋಧಿ ಘೋಷಣೆ ಕೂಗುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ ಪಂಡಿತ್ ಸುಜಿತ್ ಆಜಾದ್
ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ ಪಂಡಿತ್ ಸುಜಿತ್ ಆಜಾದ್
Updated on

ನವದೆಹಲಿ: ದೇಶದ್ರೋಹದ ಆರೋಪದಡಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಕನ್ಹಯ್ಯ ಕುಮಾರ್ ಸುದ್ದಿಯಲ್ಲಿರುವಾಗಲೇ, ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತ್ರಿಕಾರಿ ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ ಮೊಮ್ಮಗ ದೇಶವಿರೋಧಿ ಘೋಷಣೆ ಕೂಗುವವರಿಗೆ ಎಚ್ಚರಿಕೆ ನೀಡಿದ್ದಾರೆ.
ತಪ್ಪು ದಾರಿಯಲ್ಲಿ ಸಾಗುತ್ತಿರುವ ಕೆಲವು ಯುವಕರು ದೇಶಕ್ಕೆ ಹಾನಿಯುಂಟುಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಆಜಾದ್ ರ ಸೋದರ ಸಂಬಂಧಿ ಮೊಮ್ಮಗ ಪಂಡಿತ್ ಸುಜಿತ್ ಆಜಾದ್, ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರು ಹಾಗೂ ದೇಶಕ್ಕೆ ಅಗೌರವ ತೋರುವವರ ಶಿರಚ್ಛೇದ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಚಂದ್ರಶೇಖರ್ ಆಜಾದ್ ಹಾಗೂ ಅವರ ಕ್ರಾಂತಿಕಾರಿ ಸಹೋದರರು ಸ್ವರಾಜ್ಯದ ಕನಸು ಕಂಡಿದ್ದರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದರು ನನ್ನ ತಲೆಯನ್ನು ಕೊಡುತ್ತೇನೆಯೇ ಹೊರತು ಭಾರತ ವಿರೋಧಿ ಶಕ್ತಿಗಳೆದುರು ತಲೆ ತಗ್ಗಿಸುವುದಿಲ್ಲ ಎಂದು ಪಂಡಿತ್ ಸುಜಿತ್ ಆಜಾದ್ ಹೇಳಿದ್ದಾರೆ.
ಸುಜಿತ್ ಆಜಾದ್ ಹಾಗೂ ಭಗತ್ ಸಿಂಗ್ ಬ್ರಿಗೇಡ್ ನ ಹಲವು ಸದಸ್ಯರು ಜೆಎನ್ ಯು ಆಡಳಿತ ವಿಭಾಗದ ಕಟ್ಟಡದ ಬಳಿ ರಾಷ್ಟ್ರಧ್ವಜ ಹಾರಿಸಿದ್ದಾರೆ, ಕನ್ಹಯ್ಯ ಕುಮಾರ್ ಜೆಎನ್ ಯು ನಲ್ಲಿ ದೇಶವಿರೋಧಿ ಘೋಷಣೆ ಕೂಗಿದ್ದರ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಸುಜಿತ್ ಆಜಾದ್ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com