ಪಠಾಣ್ ಕೋಟ್: ಶಿವರಾತ್ರಿ ಹಬ್ಬದ ವೇಳೆ ಹಾಗೂ ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಉಗ್ರ ದಾಳಿ ಮಾಡುವ ಮೂಲಕ ದೇಶದಲ್ಲಿ ಆತಂಕ ಸೃಷ್ಟಿ ಮಾಡುವ ಗೊಂದಲದ ಮಾಹಿತಿ ಇದೆ ಎಂದು ಹಿರಿಯ ಸೇನಾ ಕಮಾಂಡರ್ ಒಬ್ಬರು ಶನಿವಾರ ಪಠಾಣ್ ಕೋಟ್ ನಲ್ಲಿ ಹೇಳಿದ್ದಾರೆ.
'ಇಂದು ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳಿವೆ. ನಿಮಗೆ ಗೊತ್ತು ಮಹಾಶಿವರಾತ್ರಿ ಬರುತ್ತಿದ್ದು, ಈ ವೇಳೆ ಉಗ್ರರು ಆತಂಕ ಸೃಷ್ಟಿಸುವ ಗೊಂದಲದ ಮಾಹಿತಿ. ಆದರೂ ಅದನ್ನು ಕಡೆಗಣಿಸದೇ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ' ಎಂದು ಪಶ್ಚಿಮ ಸೇನಾ ಕಮಾಂಡರ್ ಲೆ.ಜನರಲ್ ಕೆ.ಜೆ.ಸಿಂಗ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಸೇನಾ ಅಧಿಕಾರಿ, ಮಾಧ್ಯಮಗಳ ಮೇಲೆ ಗರಿಷ್ಠ ಪ್ರಭಾವ ಸೃಷ್ಟಿಸುವ ಉದ್ದೇಶದಿಂದ ಉಗ್ರರು ಇಂತಹ ಕೃತ್ಯಗಳಿಗೆ ಸಂಚು ರೂಪಿಸಿದ್ದಾರೆ ಎಂದರು,
ಇದೇ ವೇಳೆ ಉಗ್ರರ ಇಂತಹ ಯಾವುದೇ ಕೃತ್ಯಗಳಿಗೆ ನಾವು ಜಗ್ಗುವುದಿಲ್ಲ. ಭಾರತೀಯ ಸೇನೆ ಸಂಪೂರ್ಣ ಸಂಘಟಿತವಾಗಿದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಲೆ.ಜನರಲ್ ಸಿಂಗ್ ಹೇಳಿದ್ದಾರೆ.