ಪರಿಸರ ಮತ್ತು ಅರಣ್ಯ ಸಚಿವಾಲಯ ಪರವಾಗಿ ಹಾಜರಾದ ತಜ್ಞರ ಸಮಿತಿ, ಕಾರ್ಯಕ್ರಮ ಆಯೋಜಿಸಿರುವ ಸ್ಥಳದಲ್ಲಿ ಯಾವುದೇ ಭಗ್ನಾವಶೇಷಗಳು, ಕಸಕಡ್ಡಿಗಳು ಬಿದ್ದಿಲ್ಲ ಮತ್ತು 2006ರ ಪರಿಸರ ಪರಿಣಾಮ ನಿರ್ಧಾರಣ ಅಧಿಸೂಚನೆ ಅನ್ವಯ ಇಂತಹ ತಾತ್ಕಾಲಿಕ ನಿರ್ಮಾಣಗಳಿಗೆ ಪರಿಸರ ಅನುಮತಿ ಬೇಕಿಲ್ಲ ಎಂದು ಹೇಳಿತು.ಇದನ್ನು ಗಂಭೀರವಾಗಿ ಪರಿಗಣಿಸಿದ ‘ಎನ್ಜಿಟಿ’ ಯಾಕೆ ಅನುಮತಿ ಬೇಕಿಲ್ಲ? ವಿವರಣೆ ನೀಡಿ ಎಂದು ಸೂಚಿಸಿತು.