ಕಳೆದ ಸೋಮವಾರ ಮಧ್ಯಾಹ್ನ ನೀರುಪಾಲಾಗಿದ್ದ ಉದಯ್ ಅವರ ಶವ ಇಂದು ಪತ್ತೆಯಾಗಿದ್ದು, ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆಗೆ ಸಿದ್ಧಪಡಿಸಲಾಗುತ್ತಿದೆ. ಇನ್ನು ಮರಣೋತ್ತರ ಪರೀಕ್ಷೆಯ ನಂತರ ಉದಯ್ ಮನೆಗೆ ಶವ ಸಾಗಿಸಲಾಗುವುದು. ಮುಂದಿನ ವಿಧಿವಿಧಾನಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿರುವ ದುನಿಯಾ ವಿಜಯ್ ಅವರು ಮತ್ತೊಬ್ಬ ನಟ ಅನಿಲ್ ಶವ ಸಿಗುವವರೆಗೂ ಟೆನ್ಷನ್ ಇದ್ದೆ ಇರುತ್ತೆ ಎಂದು ಹೇಳಿದ್ದಾರೆ.