ಕಣ್ಣೂರು: ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್ (ಎಸ್ ಬಿ ಟಿ) ನಲ್ಲಿ ಹಣ ಜಮಾ ಮಾಡಲು ಬಂದಿದ್ದ ಕೇರಳ ವಿದ್ಯುಚ್ಛಕ್ತಿ ಮಂಡಳಿಯ ಸಿಬ್ಬಂದಿಯೊಬ್ಬರು ಆ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತಪಟ್ಟವರನ್ನು ೪೮ ವರ್ಷದ ಉನ್ನಿ ಎಂದು ಗುರುತಿಸಲಾಗಿದ್ದು, ಪಿಣರಾಯಿಯ ನಿವಾಸಿ ಎಂದು ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ಥಾಲಸ್ಸೇರಿ ಪೊಲೀಸರು ಹೇಳಿದ್ದಾರೆ.
ಇದು ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸರಿಗೆ ಇನ್ನು ತಿಳಿದುಬಂದಿಲ್ಲ.
"ಅವರ ಚೀಲದಿಂದ ೫.೫ ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಗುರುತು ಹೇಳಿಕೊಳ್ಳಲು ಇಚ್ಛಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.