ಬಾಂಗ್ಲಾದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿ

ಬಾಂಗ್ಲಾದೇಶದ ಗಾಜಿಪುರ ನಗರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಶನಿವಾರ ಹತ್ಯೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಢಾಕಾ: ಬಾಂಗ್ಲಾದೇಶದ ಗಾಜಿಪುರ ನಗರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಶನಿವಾರ ಹತ್ಯೆ ಮಾಡಲಾಗಿದೆ. 
ಇಬ್ಬರು ಹತ್ಯೆಯಾಗಿರುವುದನ್ನು ಧೃಢೀಕರಿಸಿರುವ ರ್ಯಾಪಿಡ್ ಆಕ್ಷನ್ ಬೆಟಾಲಿಯನ್ (ಆರ್ ಎ ಬಿ) ವಕ್ತಾರ ಮುಫ್ತಿ ಮಹಮೂದ್ ಖಾನ್, ಅವರ ಗುರುತುಗಳನ್ನು ಬಹಿರಂಗಪಡಿಸಿಲ್ಲ. 
ಗಾಜಿಪುರ ಜಿಲ್ಲೆಯ ಪಶ್ಚಿಮ ಹರಿನಾಲ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಭಯೋತ್ಪಾದನಾ ವಿರೋಧಿ ದಾಳಿಯಲ್ಲಿ ಭದ್ರತಾ ಪಡೆ ಮನೆಯೊಂದನ್ನು ಸುತ್ತುವರೆದು ಈ ಕಾರ್ಯಾಚರಣೆ ನಡೆಸಿದೆ. ಎಕೆ-47 ಬಂಧೂಕು, ಬಾಂಬ್ ತಯಾರಿಸುವ ವಸ್ತುಗಳು, ಲ್ಯಾಪ್ ಟಾಪ್ ಮತ್ತು ಬುಲೆಟ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಹಿರಿಯ ಅಧಿಕಾರಿ ಹೇಳಿದ್ದಾರೆ ಎಂದು ಢಾಕಾ ಟ್ರಿಬ್ಯುನ್ ವರದಿ ಮಾಡಿದೆ. 
ಒಂದು ತಿಂಗಳ ಹಿಂದೆಯಷ್ಟೇ ಕಟ್ಟಿದ್ದ ಈ ಕಟ್ಟಡವನ್ನು ಭಯೋತ್ಪಾದಕರು ಬಾಡಿಗೆಗೆ ಪಡೆದಿದ್ದರು ಎಂದು ಪ್ರಾದೇಶಿಕ ನಿವಾಸಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com