ಖರಗ್ಪುರ: ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ಖರಗ್ಪುರ ಕೈಗಾರಿಕಾ ನಗರಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ನಗರದ ಕೇಂದ್ರ ಭಾಗದಲ್ಲಿರುವ ಗೋಳೆ ಬಜಾರ್ ನಲ್ಲಿ ಬುಧವಾರ ರಾತ್ರಿ ಮೊಹರಂ ಜಾಥಾ ನಡೆಯುವಾಗ ದುಷ್ಕರ್ಮಿಗಳು ಕೆಲವು ಅಂಗಡಿಗಳು ಮತ್ತು ವಾಹನಗಳನ್ನು ಸುಟ್ಟಿದ್ದು, ಈ ಘರ್ಷಣೆಗೆ ಕಾರಣ ಎನ್ನಲಾಗಿದೆ.
ಗುರುವಾರ ಬೆಳಗ್ಗೆ ಸಮುದಾಯದ ಮುಖಂಡರು ಪೊಲೀಸರೊಂದಿಗೂ ಘರ್ಷಣೆಗೆ ಬಿದ್ದಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಉದ್ವಿಘ್ನ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ಕೂಡ ನಡೆಸಿದ್ದಾರೆ.