2001ರಲ್ಲಿ ಪ್ರಧಾನಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ವಿಯೆಟ್ನಾಂಗೆ ಭೇಡಿ ನೀಡಿದ್ದರು. ಇದಾದ ಬಳಿಕ ಅಂದರೆ 15 ವರ್ಷಗಳ ನಂತರ ಮೋದಿ ಈಗ ವಿಯೆಟ್ನಾಂಗೆ ತೆರಳಿರುವುದು ಹೊಸ ಭಾಷ್ಯ ಬರೆಯಲಿದೆ. ದಕ್ಷಿಣ ಏಷ್ಯಾದಲ್ಲಿ ಚೀನಾ ಪ್ರಭಾವ ಹತ್ತಿಕ್ಕುವ ನಿಟ್ಟಿನಲ್ಲಿ ಅಗತ್ಯ ವಾದ ಎಲ್ಲ ರಾಷ್ಟ್ರಗಳ ಬೆಂಬಲ ಪಡೆಯುವುದು ಪ್ರಧಾನಿ ಮೋದಿ ಅವರ ಕಾರ್ಯತಂತ್ರವಾಗಿದೆ. ಈಗಾಗಲೇ ಪರಸ್ಪರ ಸೇನಾ ನೆಲೆ ಬಳಕೆಗೆ ಅವಕಾಶ ಮಾಡಿಕೊಡುವ ಒಡಂಬಡಿಕೆಗೆ ಅಮೆರಿಕದೊಂದಿಗೆ ಸಹಿ ಹಾಕುವ ಮೂಲಕ ಭಾರತ ತನ್ನ ಶಕ್ತಿ, ಸಾಮರ್ಥ್ಯ, ತಂತ್ರಗಾರಿಕೆಯನ್ನು ಚೀನಾಗೆ ಮನವರಿಕೆ ಮಾಡಿಕೊಟ್ಟಿದೆ.