ಶ್ರೀನಗರದಲ್ಲಿ ಗೀಲಾನಿ ಪತ್ರಿಕಾಗೋಷ್ಠಿಯನ್ನು ವಿಫಲಗೊಳಿಸಿದ ಅಧಿಕಾರಿಗಳು

ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಅಧಿಕಾರಿಗಳು ಶುಕ್ರವಾರ ವಿಫಲಗೊಳಿಸಿದ್ದಾರೆ.
ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ
ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ
ಶ್ರೀನಗರ: ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಅಧಿಕಾರಿಗಳು ಶುಕ್ರವಾರ ವಿಫಲಗೊಳಿಸಿದ್ದಾರೆ.
ಶ್ರೀನಗರದ್ಲಲಿ ಗೃಹಬಂಧನಕ್ಕೆ ಒಳಗಾಗಿರುವ ಗೀಲಾನಿ ತಮ್ಮ ಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಕರೆದಿದ್ದರು. 
ಸುಮಾರು ಬೆಳಗ್ಗೆ 11 ಘಂಟೆಗೆ ಪತ್ರಕರ್ತರು ಗಿಲಾನಿ ಗೃಹದತ್ತ ಬಂದಾಗ, ಅವರನ್ನು ಅಡ್ಡಗಟ್ಟಿದ ಕೇಂದ್ರ ಮೀಸಲು ಪಡೆ ಸಿಬ್ಬಂದಿ ಮತ್ತು ಪೊಲೀಸರು, ಸ್ಥಳ ತೊರೆಯಲು ಪತ್ರಕರ್ತರಿಗೆ ತಾಕೀತು ಮಾಡಿದರು. 
ಭದ್ರತಾ ಪಡೆಗಳು ತಡೆ ಹಾಕಿದ್ದರಿಂದ ಪತ್ರಿಕಾಗೋಷ್ಠಿಯನ್ನು ನಡೆಸಲು ಸಾಧ್ಯವಾಗಲಿಲ್ಲ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com