ಇರಿತಕ್ಕೊಳಗಾಗಿ ಮೃತಪಟ್ಟ ದೆಹಲಿ ಶಿಕ್ಷಕ ಕುಟುಂಬಕ್ಕೆ 1 ಕೋಟಿ ಪರಿಹಾರ: ಎಎಪಿ ಸರ್ಕಾರ

ಇಬ್ಬರು ವಿದ್ಯಾರ್ಥಿಗಳಿಂದ ಇರಿತಕ್ಕೆ ಒಳಗಾಗಿ ಇಂದು ಮೃತಪಟ್ಟ ಶಾಲಾ ಶಿಕ್ಷಕರೊಬ್ಬರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಮಂಗಳವಾರ ಘೋಷಿಸಿದೆ.
ಇರಿತಕ್ಕೊಳಗಾಗಿ ಮೃತಪಟ್ಟ ದೆಹಲಿ ಶಿಕ್ಷಕ ಮುಖೇಶ್ ಕುಮಾರ್
ಇರಿತಕ್ಕೊಳಗಾಗಿ ಮೃತಪಟ್ಟ ದೆಹಲಿ ಶಿಕ್ಷಕ ಮುಖೇಶ್ ಕುಮಾರ್
ನವದೆಹಲಿ: ಇಬ್ಬರು ವಿದ್ಯಾರ್ಥಿಗಳಿಂದ ಇರಿತಕ್ಕೆ ಒಳಗಾಗಿ ಇಂದು ಮೃತಪಟ್ಟ ಶಾಲಾ ಶಿಕ್ಷಕರೊಬ್ಬರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಮಂಗಳವಾರ ಘೋಷಿಸಿದೆ. 
ಶಾಲೆಯ ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ 12 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ವಜಾ ಮಾಡಿದ್ದಕ್ಕೆ, ಉಳಿದ ಸಹ ವಿದ್ಯಾರ್ಥಿಗಳ ಎದುರಿಗೆ ಮುಖೇಶ್ ಕುಮಾರ್ ಎಂಬ ಸರ್ಕಾರಿ ಶಿಕ್ಷಕರನ್ನು ಈ ಇಬ್ಬರು ವಿದ್ಯಾರ್ಥಿಗಳು ಇರಿದಿದ್ದರು.
ಈ ದಾಳಿಯಾದ ಒಂದು ದಿನದ ನಂತರ ಮಂಗಳವಾರ ಆಸ್ಪತ್ರೆಯಲ್ಲಿ ಗಾಯಗೊಂಡ ಶಿಕ್ಷಕ ಕೊನೆಯುಸಿರೆಳೆದಿದ್ದರು. 
ಈ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬನು ಅಪ್ರಾಪ್ತನಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. 
ರಾಜ್ಯ ಸರ್ಕಾರ ಕೂಡ ಈ ಪ್ರಕರಣದ ಬಗ್ಗೆ ಮೆಜೆಸ್ಟ್ರೇಟ್ ತನಿಖೆ ನಡೆಸಲು ಆದೇಶಿಸಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಹೇಳಿದ್ದಾರೆ. 
"ಕುಟುಂಬದ ದುಃಖಕ್ಕೆ ಯಾವುದೇ ಪರಿಹಾರ ಸಾಧ್ಯವಿಲ್ಲ... ಅವರ ಆರ್ಥಿಕ ನೆರವಿಗಾಗಿ ಶೀಘ್ರವೇ ಸರ್ಕಾರ 1 ಕೋಟಿ ನೀಡಲಿದೆ" ಎಂದು ಸಿಸೋಧಿಯಾ ಹೇಳಿದ್ದಾರೆ. 
"ಶಿಕ್ಷಕರಿಗೆ ಗೌರವ ನೀಡುವುದನ್ನು ಎಲ್ಲ ಪೋಷಕರು ಮಕ್ಕಳಿಗೆ ಬೆಳೆಸಬೇಕು" ಎಂದು ಕೂಡ ಅವರು ಕರೆ ಕೊಟ್ಟಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com