ಬೆಳ್ಳಂದರೂರು ಕೆರೆ ಬೆಂಕಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸ್ವತಂತ್ರ ಕುಮಾರ್ ನೇತೃತ್ವದ ಹಸಿರು ಪೀಠ, ಬಿಬಿಎಂಪಿ ಸಲ್ಲಿಸಿರುವ ವಿವಾದಾತ್ಮಕ ಅಫಿಡವಿಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಇದಕ್ಕೆ ಕಾರಣರಾದ ಅಧಿಕಾರಿಗಳು ಕೂಡಲೇ ನ್ಯಾಯಾಲಯದ ಮುಂದೆ ಹಾಜರಾಗಬೇಕು, ಇಲ್ಲವೆ ಜೈಲಿಗೆ ಹೋಗಲು ಸಿದ್ದರಾಗಬೇಕು ಎಂದು ಎಚ್ಚರಿಕೆ ನೀಡಿದೆ.