ರಾಜ್ಯದಲ್ಲಿ ಕಾಂಗ್ರೆಸ್ ಕೆಟ್ಟ ಸ್ಥಿತಿಯಲ್ಲಿದೆ ಎಂದಿರುವ ಬಿ ಎಸ್ ಪಿ ಮುಖಂಡೆ, ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸದೆ, ಕೇವಲ ಯೋಜನೆಗಳನ್ನು ಭೀಮ್ ರಾವ್ ಅಂಬೇಡ್ಕರ್ ಹೆಸರಿನಲ್ಲಿ ಘೋಷಣೆ ಮಾಡಿಬಿಟ್ಟರೆ ದಲಿತರು ಅದಕ್ಕೆ ಮರುಳಾಗುವುದಿಲ್ಲ ಎಂದು ಕೂಡ ಪ್ರಧಾನಿಯವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. "ದಲಿತರನ್ನು ಮರುಳರು ಎಂದು ತಿಳಿದುಕೊಳ್ಳಬೇಡಿ, ಅವರಿಗೆ ಎಲ್ಲವು ಚೆನ್ನಾಗಿ ತಿಳಿದಿದೆ... ರೋಹಿತ್ ವೇಮುಲಾ ಅವರ ಕೊಲೆ ಮತ್ತು ಗುಜರಾತಿನ ಉನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆಯಂತಹ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ" ಎಂದು ಕೂಡ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.