ನನಗೆ ದಯಾಮರಣ ನೀಡಿ: ತಮಿಳುನಾಡು ಸರ್ಕಾರಕ್ಕೆ ರಾಜೀವ್ ಹಂತಕನ ಮನವಿ

26 ವರ್ಷಗಳ ಕಾಲ ಜೈಲಿನ ಕಂಬಿ ಹಿಂದೆ ಜೀವನ ಸವೆಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಪ್ರಕರಣದ ಅಪರಾಧಿ ಕೆ.ಪಿ ರಾಬರ್ಟ್ ಪಯಾಸ್ ತಮಿಳುನಾಡು ...
ರಾಜೀವ್ ಗಾಂಧಿ
ರಾಜೀವ್ ಗಾಂಧಿ
ಚೆನ್ನೈ: 26 ವರ್ಷಗಳ ಕಾಲ ಜೈಲಿನ ಕಂಬಿ ಹಿಂದೆ ಜೀವನ ಸವೆಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಪ್ರಕರಣದ ಅಪರಾಧಿ ಕೆ.ಪಿ ರಾಬರ್ಟ್ ಪಯಾಸ್ ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದು ದಯಾಮರಣ ಕೋರಿದ್ದಾನೆ.
ಪುಜಲ್ ಕೇಂದ್ರ ಕಾರಾಗೃಹದಲ್ಲಿರುವ 47 ವರ್ಷದ ಪಯಾಸ್ 26 ವರ್ಷ ವಯಸ್ಸಿನವನಾಗಿದ್ದಾಗ ಜೈಲು ಸೇರಿದ. 26 ವರ್ಷ ಕಾರಾಗೃಹದಲ್ಲೇ ಕಳೆದಿದ್ದಾನೆ.
2014ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯ ಲಲಿತಾ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಲು ವಿಧಾನ ಸಭೆಯಲ್ಲಿ ನಿರ್ಣಯ ಪಾಸು ಮಾಡಿದ್ದರು.
ಆದರೆ ಇದಕ್ಕೆ ಕೇಂದ್ರ ಸರ್ಕಾರ ಪ್ರಬಲ ವಿರೋಧ ವ್ಯಕ್ತ ಪಡಿಸಿತ್ತು. ನನ್ನ ಇಡೀ ಜೀವನವನ್ನು ಜೈಲಿನಲ್ಲೇ ಕಳೆಯಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಆತ ಹೇಳಿದ್ದಾನೆ.
ಇತ್ತೀಚಿನ ದಿನಗಳಲ್ಲಿ ನನ್ನ ಕುಟುಂಬಸ್ಥರು ಯಾರೊಬ್ಬರು ನನ್ನನ್ನು ನೋಡಲು ಬರುತ್ತಿಲ್ಲ, ಹಾಗಾಗಿ ನನ್ನ ಜೀವನ ಮುಂದುವರಿಸುವುದು ಯಾವುದೇ ಅರ್ಥವಿಲ್ಲ, ತನಗೆ ದಯಾಮರಣ ನೀಡಬೇಕೆಂದು ರಾಬರ್ಟ್ ಮನವಿ ಮಾಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com