೨೫ ನಿಮಿಷದ ಭಾಷಣದಲ್ಲಿ, ಬೈಜಾಲ್ ಕಾರ್ಮಿಕ ವರ್ಗಕ್ಕೆ ಕನಿಷ್ಠ ವೇತನವನ್ನು ಹೆಚ್ಚಿಸಿರುವುದರ ಬಗ್ಗೆ ಕೂಡ ಪ್ರಸ್ತಾಪಿಸಿದ್ದಾರೆ. ದೆಹಲಿ ಜಲ ಮಂಡಳಿಯ ಅಭಿಯಾನದ ಬಗ್ಗೆ ಕೂಡ ಅವರು ಮಾತನಾಡಿದ್ದು, ೧೧೭೫ ಅನಧಿಕೃತ ಕಾಲೋನಿಗಳಲ್ಲಿ ನೀರು ಸರಬರಾಜು ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿ ಮನೆಗೂ ಉಚಿತವಾಗಿ ೨೦,೦೦೦ ಲೀಟರ್ ನೀರನ್ನು ಸರ್ಕಾರ ನೀಡುತ್ತಿರುವುದಾಗಿ ಕೂಡ ಅವರು ಹೇಳಿದ್ದಾರೆ.