ನೆನ್ನೆ ೭೬ ನೇ ವಸಂತಕ್ಕೆ ಕಾಲಿಟ್ಟಿರುವ ಅಮರಿಂದರ್ ಸಿಂಗ್, ತುಂಬಿದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದಂತೆ ಡ್ರಗ್ ಹಾವಳಿ ತಡೆಗಟ್ಟುವುದು ತಮ್ಮ ತುರ್ತು ಆದ್ಯತೆಗಳಲ್ಲಿ ಒಂದು ಎಂದು ಕೂಡ ಹೇಳಿದ್ದಾರೆ. ಸಾವಿರಾರು ಯುವಕರ ಜೀವನವನ್ನು ಹಾಳು ಮಾಡುತ್ತಿರುವ ಪ್ರತಿಯೊಬ್ಬನನ್ನು ಕಟಕಟೆಗೆ ತರುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಹೆಚ್ಚಿರುವ ಡ್ರಗ್ ಹಾವಳಿ ಪಂಜಾಬ್ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿತ್ತು.