ವಿಶ್ವ ಸಮುದಾಯದ ಸಾಮೂಹಿಕ ಕ್ರಮಗಳಿಂದ ಮಾತ್ರ ಭಯೋತ್ಪಾದನೆ ನಿಗ್ರಹ ಸಾಧ್ಯ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಬ್ರಿಟನ್ ಸಂಸತ್ ಭವನ ಬಳಿ ನಡೆದ ಉಗ್ರ ದಾಳಿ ಪ್ರಕರಣವನ್ನು ಕಟು ಶಬ್ದಗಳಿಂದ ಟೀಕಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ವಿಶ್ವ ಸಮುದಾಯದ ಸಾಮೂಹಿಕ ಕ್ರಮಗಳಿಂದ ಮಾತ್ರ ಭಯೋತ್ಪಾದನೆ ನಿಗ್ರಹ ಸಾಧ್ಯ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
Updated on

ನವದೆಹಲಿ: ಬ್ರಿಟನ್ ಸಂಸತ್ ಭವನ ಬಳಿ ನಡೆದ ಉಗ್ರ ದಾಳಿ ಪ್ರಕರಣವನ್ನು ಕಟು ಶಬ್ದಗಳಿಂದ ಟೀಕಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ವಿಶ್ವ ಸಮುದಾಯದ ಸಾಮೂಹಿಕ ಕ್ರಮಗಳಿಂದ ಮಾತ್ರ ಭಯೋತ್ಪಾದನೆ  ನಿಗ್ರಹ ಸಾಧ್ಯ ಎಂದು ಹೇಳಿದ್ದಾರೆ.

ಟ್ವಿಟರ್ ನಲ್ಲಿ ಲಂಡನ್ ಉಗ್ರ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಬ್ರಿಟನ್ ಸರ್ಕಾರದೊಂದಿಗೆ ಭಾರತ ಬೆಂಬಲವಾಗಿರಲಿದೆ. ವಿಶ್ವ ಸಮುದಾಯ ಸಾಮೂಹಿಕವಾಗಿ ಹೋರಾಡಿದರೆ ಮಾತ್ರ  ಭಯೋತ್ಪಾದನೆಯನ್ನು ಬುಡಸಹಿತ ಕಿತ್ತೆಸೆಯಬಹುದು. ಇದಕ್ಕಾಗಿ ವಿಶ್ವ ಸಮುದಾಯದ ಸಾಮೂಹಿಕ ಕ್ರಮಗಳು ಅತ್ಯಗತ್ಯ ಎಂದು ಹೇಳಿದ್ದಾರೆ.

ಲಂಡನ್ ಸಂಸತ್ ಭವನದ ಬಳಿ ಉಗ್ರ ದಾಳಿ ನಡೆದ ಕುರಿತು ಮಾಹಿತಿ ಕೇಳಿ ನಿಜಕ್ಕೂ ಆಘಾತವಾಯಿತು. ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಸಂತಾಪ ಸೂಚಿಸುತ್ತೇನೆ ಎಂದು ಪ್ರಣಬ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com