ವಿಜಯವಾಡ: ಯುಗಾದಿ ಸಂವತ್ಸರದ ಹೊಸವರ್ಷ ಬುಧವಾರ ಪ್ರಾರಂಭವಾಗಲಿದ್ದು, ಅದಕ್ಕೆ ಒಂದು ದಿನದ ಮುಂಚಿತವಾಗಿ ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, ಪಕ್ಷಕ್ಕೆ ಯುವ ಮುಖಂಡರು, ವಕ್ತಾರರು, ವಿಷಯ ಬರಹಗಾರರು ಮತ್ತು ವಿಶ್ಲೇಷಕರ ನೇಮಕಾತಿಯನ್ನು ಪ್ರಾರಂಭಿಸಿದ್ದಾರೆ. ಆದರೆ ಸದ್ಯಕ್ಕೆ ಈ ನೇಮಕಾತಿ ಅನಂತಪುರ ಜಿಲ್ಲೆಗಷ್ಟೇ ಸೀಮಿತವಾಗಿದೆ.