ಆಂಧ್ರದಲ್ಲಿ ಜನಸೇನಾ ಪಕ್ಷಕ್ಕೆ ನೇಮಕಾತಿ ಪ್ರಾರಂಭಿಸಿದ ಪವನ್ ಕಲ್ಯಾಣ್

ಯುಗಾದಿ ಸಂವತ್ಸರದ ಹೊಸವರ್ಷ ಬುಧವಾರ ಪ್ರಾರಂಭವಾಗಲಿದ್ದು, ಅದಕ್ಕೆ ಒಂದು ದಿನದ ಮುಂಚಿತವಾಗಿ ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, ಪಕ್ಷಕ್ಕೆ ಯುವ ಮುಖಂಡರು,
ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್
ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್
ವಿಜಯವಾಡ: ಯುಗಾದಿ ಸಂವತ್ಸರದ ಹೊಸವರ್ಷ ಬುಧವಾರ ಪ್ರಾರಂಭವಾಗಲಿದ್ದು, ಅದಕ್ಕೆ ಒಂದು ದಿನದ ಮುಂಚಿತವಾಗಿ ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, ಪಕ್ಷಕ್ಕೆ ಯುವ ಮುಖಂಡರು, ವಕ್ತಾರರು, ವಿಷಯ ಬರಹಗಾರರು ಮತ್ತು ವಿಶ್ಲೇಷಕರ ನೇಮಕಾತಿಯನ್ನು ಪ್ರಾರಂಭಿಸಿದ್ದಾರೆ. ಆದರೆ ಸದ್ಯಕ್ಕೆ ಈ ನೇಮಕಾತಿ ಅನಂತಪುರ ಜಿಲ್ಲೆಗಷ್ಟೇ ಸೀಮಿತವಾಗಿದೆ. 
ಹೇಳಿಕೆ ಬಿಡುಗಡೆ ಮಾಡಿರುವ ಪವನ್ ಕಲ್ಯಾಣ್, ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವವ ಮುಖಂಡರನ್ನು ರೂಪಿಸಲು ಈ ನೇಮಕಾತಿ ಎಂದಿದ್ದಾರೆ. ರಾಜ್ಯ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ತೊಂದರೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವವರನ್ನು ಆಹ್ವಾನಿಸುತ್ತಿರುವುದಾಗಿ ಅವರು ಹೇಳಿದ್ದಾರೆ. 
ಜನಸೇನಾ ಅಂತರ್ಜಾಲ ತಾಣದಲ್ಲಿ ಅರ್ಜಿ ಲಭ್ಯವಿದ್ದು, ಮಾರ್ಚ್ ೨೮ ರಿಂದ ಏಪ್ರಿಲ್ ೧೪ ರೊಳಗೆ ನೊಂದಾಯಿಸಿಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com