ಪಾಕಿಸ್ತಾನಿ ಸೈನಿಕರ ತಲೆ ಕತ್ತರಿಸಿ ತಂದವರಿಗೆ 5 ಕೋಟಿ ರು. ಬಹುಮಾನ: ಮುಸ್ಲಿಂ ಸಂಘಟನೆ

ಪಾಕಿಸ್ತಾನ ಸೈನಿಕರ ತಲೆ ಕತ್ತರಿಸಿ ಭಾರತಕ್ಕೆ ತಂದವರಿಗೆ 5 ಕೋಟಿ ರು ಬಹಮಾನ ನೀಡುವುದಾಗಿ ಮುಸ್ಲಿಂ ಸಂಘಟನೆಯೊಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಅಜ್ಮೀರ್: ಪಾಕಿಸ್ತಾನ ಸೈನಿಕರ ತಲೆ ಕತ್ತರಿಸಿ ಭಾರತಕ್ಕೆ ತಂದವರಿಗೆ 5 ಕೋಟಿ ರು ಬಹಮಾನ ನೀಡುವುದಾಗಿ ಮುಸ್ಲಿಂ ಸಂಘಟನೆಯೊಂದು ಘೋಷಿಸಿದೆ.
ದೆಹಲಿ ಮೂಲದ ಮುಸ್ಲಿಂ ಯುವ ಆತಂಕವಾದಿ ವಿರೋಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಶಕೀಲ್ ಸೈಫಿ ಈ ಬಹುಮಾನ ಘೋಷಿಸಿದ್ದು ಭಾರತೀಯ ಸೇನೆಗೆ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಪಾಕಿಸ್ತಾನಿ ಸೈನಿಕರ ತಲೆ ಕತ್ತರಿಸಿ ಯಾರು ಭಾರತಕ್ಕೆ ಹಸ್ತಾಂತರಿಸುತ್ತಾರೋ ಅಂತವರಿಗೆ 5 ಕೋಟಿ ಹಣವನ್ನು ನೀಡುವುದಾಗಿ ಅವರು ಹೇಳಿದ್ದಾರೆ.  ಸಾರ್ವಜನಿಕರಿಂದ ಹಾಗೂ ಸ್ವಯಂ ಪ್ರೇರಿತರಾಗಿ ಹಣ ನೀಡುವವರಿಂದ ದೇಣಿಗೆ ಸಂಗ್ರಹಿಸಿ, ಇತ್ತೀಚೆಗೆ ಗಡಿ ನಿಯಂತ್ರಣ ರೇಖೆ ಬಳಿ ಇಬ್ಬರು ಭಾರತೀಯ ಯೋಧರ ಶಿರಚ್ಛೇಧ ಮಾಡಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಯೋಧರ ತಲೆ ತಂದವರಿಗೆ ಹಣ ನೀಡುವುದಾಗಿ ಪ್ರಕಟಿಸಿದ್ದಾರೆ.
ಭಾರತೀಯ ಯೋಧರ ಶಿರಚ್ಛೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕಳೆದ ವರ್ಷ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂತೆ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com