ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ಇಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತಮ್ಮ ವಾದ ಮಂಡಿಸುತ್ತಿದ್ದು, ಮೊದಲು ವಾದ ಮಂಡಿಸಿದ ಭಾರತ, ಈ ಕೂಡಲೇ ಜಾಧವ್ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದೆ. ಅಲ್ಲದೆ ಮಾನವ ಹಕ್ಕುಗಳು ವಿಶ್ವದ ಯಾವುದೇ ಕಡೆಯಲ್ಲಾದರೂ ಅತ್ಯಗತ್ಯವಾಗಿದ್ದು ಅದನ್ನು ಪಾಕಿಸ್ತಾನ ಗಾಳಿಗೆ ತೂರಿದೆ. ಜಾಧವ್ ಅವರಿಗೆ ದೂತಾವಾಸ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದ ಮನವಿಗೆ ಪಾಕಿಸ್ತಾನ ಜಾಣಕಿವುಡು ಪ್ರದರ್ಶಿಸುತ್ತಿದೆ ಎಂದು ಆಪಾದಿಸಿತ್ತು.