ಅನಿಲ್ ದವೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತ ಪಡಿಸಿದ್ದಾರೆ, ಅನಿಲ್ ದವೆ ಅವರ ನಿಧನದಿಂದ ನನಗೆ ವಯಕ್ತಿಕ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ, ನಿನ್ನೆ ಸಂಜೆಯವರೆಗೂ ನಾನು ಅವರ ಜೊತೆಗೆ ಇದ್ದೆ, ಆದರೆ ಅವರು ಈಗ ಇಲ್ಲ ಎಂದು ಆಘಾತ ವ್ಯಕ್ತ ಪಡಿಸಿದ್ದಾರೆ.ಪರಿಸರ ಸಂರಕ್ಷಣೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಅನಿಲ್ ದವೆ ಜನಸೇವೆಯನ್ನೇ ಕಾಯಕವನ್ನಾಗಿಸಿಕೊಂಡಿದ್ದರು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.