ಕೇರಳ ಬೀಫ್ ಔತಣಕೂಟ ಖಂಡಿಸಿ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿದ ಹಿಂದೂ ಮುಖಂಡ

ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಗೋಮಾಂಸ ಔತಣಕೂಟವನ್ನು ಖಂಡಿಸಿರುವ ಹಿಂದೂ ಮುಖಂಡ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇದರ ಬಗ್ಗೆ ಕಾಂಗ್ರೆಸ್
ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ
ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ
Updated on
ಚಮೋಲಿ (ಉತ್ತರಾಖಂಡ್): ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಗೋಮಾಂಸ ಔತಣಕೂಟವನ್ನು ಖಂಡಿಸಿರುವ ಹಿಂದೂ ಮುಖಂಡ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇದರ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ. 
ಸದ್ಯಕ್ಕೆ ಜೋಷಿಮಠದಲ್ಲಿ ತಂಗಿರುವ ಈ ಸನ್ಯಾಸಿ ವರದಿಗಾರರೊಂದಿಗೆ ಮಾತನಾಡಿ ಗೋಹತ್ಯೆ ಭಾರತೀಯ ಸಂಸ್ಕೃತಿಗೆ ವಿರುದ್ಧ ಎಂದಿದ್ದಾರೆ.
ಈ ವಿಷಯವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಂದಿಗೆ ಮಾತನಾಡಿದ್ದು, ನಮ್ಮ ಭಾವನೆಗಖನ್ನು ಅವರಿಗೆ ತಿಳಿಸಿದ್ದೇನೆ ಎಂದು ಕೂಡ ಅವರು ಹೇಳಿದ್ದಾರೆ. 
ರಾಜಕೀಯ ವಿಷಯಗಳಲ್ಲಿ ಶಂಕರಾಚಾರ್ಯ ಕಾಂಗ್ರೆಸ್ ಪಕ್ಷಕ್ಕ ನಿಕಟ ಎಂದೇ ಪರಿಗಣಿಸಲಾಗುತ್ತದೆ. ತಪ್ಪು ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಭರವಸೆ ನನಗೆ ಸಿಕ್ಕಿದೆ ಎಂದು ಕೂಡ ಅವರು ತಿಳಿಸಿದ್ದಾರೆ.
ಲಖನೌ ನಲ್ಲಿ ವಿಚಾರಣೆಯಲ್ಲಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ಅಲ್ಲಿ ಮಸೀದಿಯೇ ಇರಲಿಲ್ಲ ಬದಲಾಗಲಿ ಅಲ್ಲಿ ರಾಮ, ಸೀತೆ ಮತ್ತು ಹನುಮಾನ್ ದೇವಾಲಯಗಳು ಇದ್ದವು, ಇಂದಿಗೂ ಇವೆ ಮತ್ತು ಅವುಗಳ ಪಳೆಯುಳಿಕೆಗಳು ಕೂಡ ಸಿಕ್ಕಿವೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com