ಪಕ್ಷ ಸೇರ್ಪಡೆ ಸಂಬಂಧ ರಾಣೆ ಕಡೆಯಿಂದ ಯಾವುದೇ ಮಾತುಕತೆಯಿಲ್ಲ: ಬಿಜೆಪಿ

ಕಾಂಗ್ರೆಸ್ ತೊರೆದಿರುವ ನಾರಾಯಣ ರಾಣೆ ಅವರ ಕಡೆಯಿಂದ ಪಕ್ಷ ಸೇರ್ಪಡೆ ಸಂಬಂಧ ಯಾವುದೇ ಪ್ರಸ್ತಾವನೆ ಅಥವಾ ಔಪಚಾರಿಕ ಮಾತುಕತೆ ನಡೆದಿಲ್ಲ ಎಂದು ...
ನಾರಾಯಣ ರಾಣೆ
ನಾರಾಯಣ ರಾಣೆ
ಮುಂಬಯಿ/ ಪುಣೆ: ಕಾಂಗ್ರೆಸ್ ತೊರೆದಿರುವ ನಾರಾಯಣ ರಾಣೆ ಅವರ ಕಡೆಯಿಂದ ಪಕ್ಷ ಸೇರ್ಪಡೆ ಸಂಬಂಧ ಯಾವುದೇ ಪ್ರಸ್ತಾವನೆ ಅಥವಾ ಮಾತುಕತೆ ನಡೆದಿಲ್ಲ ಎಂದು ಭಾರತೀಯ ಜನತಾ ಪಕ್ಷ ಹೇಳಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ನಾರಾಯಣ ರಾಣೆ ಅವರು ಪಕ್ಷ ತೊರೆಯುವುದಾಗಿ ಗುರುವಾರ ಘೋಷಿಸಿದ್ದಾರೆ.
ನಾರಾಯಣ ರಾಣೆ ಬಿಜೆಪಿ ಸೇರ್ಪಡೆ ಸಂಬಂದ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಕಾಂತ ಪಾಟೀಲ್, ಪಕ್ಷ ಸೇರುವಂತೆ ಆಹ್ವಾನಿಸಲು ನನಗೆ ಯಾವುದೇ ಹಕ್ಕಿಲ್ಲ, ನನಗೆ ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ರಾಣೆ ಮುಖ್ಯಮಂತ್ರಿಯಾಗಿದ್ದವರು,ಈ ಸಂಬಂಧ ಅಮಿತ್ ಶಾ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
ರಾಣೆ ಬಿಜೆಪಿ ಸೇರುವ ಸಂಬಂಧ ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ. ರಾಣೆ ಒಂದು ವೇಳೆ ಬಿಜೆಪಿ ಸೇರಿದರೆ ತಮ್ಮ ಸಚಿವ ಖಾತೆಯನ್ನು ಅವರಿಗೆ ಬಿಟ್ಟು ಕೊಡುವುದಾಗಿ ಈ ಹಿಂದೆ ಪಾಟೀಲ್ ಘೋಷಿಸಿದ್ದರು.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಪಕ್ಷದ ವಕ್ತಾರ ಮಾಧವ್ ಭಂಡಾರಿ, ಸ್ವತಃ ರಾಣೆ ಅವರೇ ಈ ಬಗ್ಗೆ ಯಾವುದೇ ಹೇಳಿಕೆ ನೀಡದಿರುವಾಗ ನಾವು ಏಕೆ ಪ್ರತಿಕ್ರಿಯೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com