ವಿಡಿಯೋ
Watch | ಸರ್ಕಾರಿ ಗೌರವದೊಂದಿಗೆ ಪಹಲ್ಗಾಮ್ ಮೃತರ ಅಂತ್ಯಕ್ರಿಯೆ; 177 ಮಂದಿ ಪ್ರವಾಸಿಗರು ರಾಜ್ಯಕ್ಕೆ ವಾಪಸ್; ಉಗ್ರ ದಾಳಿ ಖಂಡಿಸಿ ಸಿದ್ದರಾಮಯ್ಯ ಸಂಪುಟ ನಿರ್ಣಯ ಅಂಗೀಕಾರ!
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದ ಕರ್ನಾಟಕ ಮೂಲದ ಮಂಜುನಾಥ್ ರಾವ್ ಹಾಗೂ ಭರತ್ ಭೂಷಣ್ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು. ಕಾಶ್ಮೀರದಲ್ಲಿ ಸಿಲುಕಿದ್ದ ಕರ್ನಾಟಕ ಮೂಲದ 177 ಪ್ರವಾಸಿಗರನ್ನು ವಿಶೇಷ ವಿಮಾನದ ಮೂಲಕ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಬೆಂಗಳೂರಿಗೆ ಸುರಕ್ಷಿತವಾಗಿ ಕರೆತರಲಾಯಿತು.
