ಜೆನ್ ಝೀ (Gen Z) ಗಳು "ನಮ್ಮ ಜನರು" ಮತ್ತು ಅವರು ಪ್ರತಿಭಟಿಸುತ್ತಿದ್ದರೆ ಅವರ ಕಳವಳಗಳನ್ನು ಪರಿಹರಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
ಮುಂಬೈನಲ್ಲಿ ಆಯೋಜಿಸಲಾಗಿದ್ದ 'ಜಗತ್ತನ್ನು ಒಗ್ಗೂಡಿಸುವಲ್ಲಿ ಯುವಕರ ಪಾತ್ರ, ಭಾರತೀಯ ಮಾರ್ಗ' ಎಂಬ ಶೀರ್ಷಿಕೆಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಭಾಗವತ್ ಹೀಗೆ ಹೇಳಿದರು.
ಜೆನ್ ಝೀ ಗಳು ಆಂದೋಲನ ಮಾಡುತ್ತಿದ್ದರೆ, ಅವರು ಖಂಡಿತವಾಗಿಯೂ ರಾಷ್ಟ್ರವಿರೋಧಿಗಳಲ್ಲ; ಅವರು ನಮ್ಮ ಸ್ವಂತ ಜನರು, ನಮ್ಮ ಮುಂದಿನ ಪೀಳಿಗೆ.
ಜೆನ್ ಝೀ ಪ್ರತಿಭಟನೆ ಮಾಡಬಾರದು ಎಂದು ಹೇಳುವುದಿಲ್ಲ, ಆದರೆ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ನಿರ್ದಿಷ್ಟ ಮಾರ್ಗಗಳಿವೆ ಎಂದು ಹೇಳಿದರು.
ಅವರು ದೇಶಭಕ್ತಿ ಮತ್ತು ಸೇವೆಗೆ ಸಂಬಂಧಿಸಿದ ಕರೆಗಳಿಗೆ ನಿಜವಾಗಿಯೂ ಪ್ರತಿಕ್ರಿಯಿಸುತ್ತಾರೆ ಎಂದು ಭಾಗವತ್ ಹೇಳಿದರು.
ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ಅವರೇ ನೋಂದಣಿಯಾಗಿಲ್ಲದಿದ್ದರೆ, ದೇಶಭಕ್ತಿಯ ಪ್ರಮಾಣೀಕರಣ ನೀಡಲು ಅವರು ಯಾರು? ಎಂದು ಪ್ರಶ್ನಿಸಿದರು. ವಿಡಿಯೋ ಇಲ್ಲಿದೆ ನೋಡಿ.