ವಿಡಿಯೋ
ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ಆಚರಣೆ ಕಾರ್ಯಕ್ರಮದ ವೈರಲ್ ವಿಡಿಯೋವೊಂದು 'ವಂದೇ ಮಾತರಂ' ಕುರಿತು ಹೊಸ ವಿವಾದಕ್ಕೆ ಕಾರಣವಾಗಿದೆ.
'ವಂದೇ ಮಾತರಂ' ಗೀತೆಯನ್ನು ಹಾಡುತ್ತಿದ್ದ ವೇಳೆ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಅದನ್ನು ಮಧ್ಯದಲ್ಲೇ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಟೀಕಿಸುತ್ತಿದ್ದಾರೆ.
ಆದರೆ, ಗೀತೆಯನ್ನು ಹಾಡುಗಾರರು ಮುಂದುವರಿಸಿದ್ದು, ಕಾರ್ಯಕ್ರಮದಲ್ಲಿ ಪೂರ್ಣ 'ವಂದೇ ಮಾತರಂ' ಹಾಡಲಾಗಿದೆ.
ಈ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಸೋನಿಯಾ ಗಾಂಧಿ ನಮ್ಮ ದೇಶದವ್ರಾ? ಅವರದ್ದು ಇಟಲಿ ರಕ್ತ ಅಲ್ವಾ..? ಎಂದು ಟೀಕಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.