ವಿಡಿಯೋ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಶನಿವಾರ ಘೋಷಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಕುರಿತು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ನಾವು ಸಾಧಿಸಿದ್ದೇವೆ ಎಂದು ಹರ್ಷದಿಂದ ಹೇಳಿದ್ದಾರೆ.
ಇಂದು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕಿದೆ.
ನಾವು ಈ ಸರ್ಕಾರಕ್ಕೆ ತಲೆಬಾಗದಿದ್ದರೆ, ಇನ್ನೂ ಅನೇಕ ರಾಜೀನಾಮೆಗಳಿಗೆ ಒತ್ತಾಯಿಸಬಹುದು ಎಂಬುದನ್ನು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ಸಾಬೀತುಪಡಿಸುತ್ತದೆ.
ಭಯಪಡುವ ಅಗತ್ಯವಿಲ್ಲ, ಇದು ಪ್ರಜಾಪ್ರಭುತ್ವ. ನಮ್ಮ ಇನ್ನೂ ಎರಡು ಬೇಡಿಕೆಗಳು ಈಡೇರಬೇಕಿದೆ.
ಆತ್ಮಹತ್ಯೆಯಿಂದ ಸಾವನ್ನಪ್ಪಿದ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ ಪರಿಹಾರ ಮತ್ತು ಜುಲೈ 20 ರಂದು ಲಾಠಿ ಚಾರ್ಜ್ಗೆ ಕಾರಣರಾದ ಪೊಲೀಸರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.