ವಿಡಿಯೋ
ಆರ್ಥಿಕತೆಯ ಕುರಿತಾದ ನಿರಂತರ ನಕಾರಾತ್ಮಕ ಟೀಕೆಗಳು ಆತಂಕಕಾರಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ 'ನವಯುಗದ ತೆರಿಗೆ ಪದ್ಧತಿ' (New Age Taxation) ಕುರಿತಾದ ಎಂಟನೇ ಅಂತರರಾಷ್ಟ್ರೀಯ ತೆರಿಗೆ ಸಮ್ಮೇಳನದಲ್ಲಿ ಸೀತಾರಾಮನ್ ಮಾತನಾಡಿದರು.
ಜಾಗತಿಕ ಸವಾಲುಗಳ ನಡುವೆಯೂ ಭಾರತವು ತನ್ನ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಮತ್ತು ಇತರರಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು.
ಸ್ವತಂತ್ರ ತೆರಿಗೆ ನೀತಿ ಸಂಶೋಧನೆಯು ಸಾರ್ವಜನಿಕ ಚರ್ಚೆಯ ಭಾಗವಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ತೆರಿಗೆ ವೃತ್ತಿಪರರು ವಲಯವಾರು ಹಿತಾಸಕ್ತಿಗಳನ್ನು ಮೀರಿ ನಿಂತು, ರಾಷ್ಟ್ರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು. ವಿಡಿಯೋ ಇಲ್ಲಿದೆ ನೋಡಿ.