ಸುದ್ದಿ
ಅಂಬರೀಶ್ ಹಣೆಗೆ ಮಂಡ್ಯದ ಮಣ್ಣಿನ ತಿಲಕವಿಟ್ಟ ಪತ್ನಿ, ಮಗ, ವಿಡಿಯೋ ನೋಡಿ!
ಮಂಡ್ಯದ ವಿಶ್ವೇಶ್ವರಯ್ಯ ಮೈದಾನದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಮಂಡ್ಯ ಜನತೆಗಾಗಿ ಅನುವು ಮಾಡಿಕೊಡಲಾಗಿತ್ತು. ಅಂತಿಮ ದರ್ಶನದ ಬಳಿಕ ಅಂಬಿ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ರವಾನಿಸುವ ಮುನ್ನ ಪತ್ನಿ ಸುಮಲತಾ ಹಾಗೂ ಮಗ ಅಭಿಶೇಕ್ ಮಂಡ್ಯದ ಗಂಡು ಅಂಬಿ ಹಣೆಗೆ ಮಂಡ್ಯದ ಮಣ್ಣಿನ ತಿಲಕವಿಟ್ಟರು. ಈ ದೃಶ್ಯ ನೋಡುಗರ ಮನ ಕಲಕುವಂತಿತ್ತು. ವಿಡಿಯೋ ಕೃಪೆ: ಎಸ್ ಉದಯ್ ಶಂಕರ್(ಟಿಎನ್ಐಇ)