ಸುದ್ದಿ
ದೂದ್ ಸಾಗರದಲ್ಲಿ ಜನ ಸಾಗರ...ಪ್ರವಾಸಿಗರಿಗೆ ನಿಷೇಧ; ಗೋವಾ ಸರ್ಕಾರದ ನಿರ್ಧಾರಕ್ಕೇನು ಕಾರಣ?
ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಾ ಬೀಳುವ ನೀರು. ಇನ್ನೊಂದೆಡೆ ಚಲಿಸುವ ರೈಲು. ಅದ್ಭುತವಾದ ನಯನಮನೋಹರ ದೃಶ್ಯವನ್ನು ನೀಡುವ ದೂದ್ ಸಾಗರ್ ಜಲಪಾತ ವೀಕ್ಷಿಸಲು ಜನರು ದಾಂಗುಡಿ ಇಡುತ್ತಿದ್ದಾರೆ. ಅದರಲ್ಲಿಯೂ ಮಳೆಗಾಲದಲ್ಲಿ ಅದರ ಸೊಗಡು ಮತ್ತಷ್ಟು ಅದ್ಭುತ. ಹೀಗೆ ಪ್ರವಾಸಕ್ಕೆಂದು ಬರುವ ಜನರು ಅಲ್ಲಿ ಮೋಜು ಮಸ್ತಿ ಮಾಡಿ ಪ್ರಕೃತಿಯನ್ನು ಹಾಳು ಮಾಡುವುದರಲ್ಲಿಯೂ ಹಿಂದೆ ಬಿದ್ದಿಲ್ಲ.