ದೇಶಾದ್ಯಂತ ಇದು ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ವಿಜಯ್ ದಿವಸ್ ಆಚರಣೆಯಲ್ಲಿ ತೊಡಗಿದ್ದು, ಭಾರತೀಯ ಸೈನಿಕರ ಪರಾಕ್ರಮ ವಿಶ್ವಾದ್ಯಂತ ಮನೆ ಮಾತಾಗಿತ್ತು. ಆದರೆ ಈ ಜಯ ಭಾರತದ ಪಾಲಿಗೆ ಅಷ್ಟು ಸುಲಭವಾಗಿ ಒಲಿದುಬಂದಿರಲಿಲ್ಲ. ಒಂದೆಡೆ ಉಗ್ರರು ಮತ್ತೊಂದೆಡೆ ಪಾಪಿಸ್ತಾನದ ಸೈನಿಕರು ಕಾರ್ಗಿಲ್ ಕಣಿವೆಯನ್ನು ವಶಪಡಿಸಿಕೊಂಡಿದ್ದರು. ಇದಕ್ಕೆ ಪಾಕಿಸ್ತಾನ ಸರ್ಕಾರದ ಕುಮ್ಮಕ್ಕು ಬೇರೆ..ಆದರೆ ಈ ಹಂತದಲ್ಲಿ ಭಾರತ ಇಟ್ಟಿದ್ದ ಪ್ರತಿಯೊಂದು ನಡೆಯೂ ವಿಶ್ವ ಸಮುದಾಯದ ಮೆಚ್ಚುಗೆ ಗಳಿಸಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಕರೆ ಮಾಡಿ ಯುದ್ಧ ನಿಲ್ಲಿಸುವಂತೆಯೂ ಮತ್ತು ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಳಿದ್ದರು. ಆದರೆ ಅವರ ಕರೆಗೆ ಕೇಳಿಯೂ ಕೇಳದ ರೀತಿಯಲ್ಲಿ ನವಾಜ್ ಷರೀಫ್ ಉತ್ತರಿಸುವ ಮೂಲಕ ಸೇನೆ ಹಿಂಪಡೆಯಲು ಪರೋಕ್ಷ ಹಿಂದೇಟು ಹಾಕಿದರು. ಇಜಕ್ಕೂ ಮೊದಲು ಕ್ಲಿಂಟನ್ ಇಸ್ಲಾಮಾಬಾದ್ ಗೆ ಪತ್ರ ಬರೆದಿದ್ದರಾದರೂ ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ನೇರವಾಗಿ