ಆಫೀಸು ಕೆಲಸ ಮುಗಿಸಿ ಗಂಡ ಮನೆಗೆ ಬಂದಾಗ ಹೆಂಡತಿಯಾದವಳು ಬಿಸಿ ಬಿಸಿ ಕಾಫಿ ಮಾಡಿಕೊಡಬೇಕು ಎಂಬ ಆಸೆ ಹೆಚ್ಚಿನ ಗಂಡಸರಿಗೆ ಇರುತ್ತೆ. ಆದರೆ ಸುಸ್ತಾಗಿ ಬಂದ ಗಂಡನಿಗೆ ಕೆಲವೊಮ್ಮೆ ಬಿಸಿ ಬಿಸಿ ಕಾಫಿ ಜತೆ ದೂರುಗಳ ಪಟ್ಟಿಯನ್ನೂ ಹೆಂಡ್ತಿ ಒಪ್ಪಿಸುತ್ತಾಳೆ. ಅಷ್ಟೊತ್ತಿಗೆ ಅಲ್ಲಿ ಜಗಳ ಶುರುವಾಗಿಯೇ ಬಿಡುತ್ತೆ. ಮನೆಗೆ ಬಂದ ಕೂಡಲೇ ಶುರುವಾಗುತ್ತೆ ನಿನ್ನ ರಾಮಾಯಣ ಎಂದು ಗಂಡ ಗೊಣಗುಟ್ಟಿದರೆ ನಿನ್ನನ್ನು ಮದುವೆಯಾಗಿ ತಪ್ಪು ಮಾಡಿಬಿಟ್ಟೆ ಅನ್ನುತ್ತಾಳೆ ಹೆಂಡತಿ. ಹೀಗೆ ಪರಸ್ಪರ ತಪ್ಪುಗಳನ್ನು ಹೊರಿಸಿಕೊಂಡು ಅಲ್ಲೊಂದು ಮಹಾ ಯುದ್ಧವೇ ನಡೆಯುತ್ತವೆ. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬುದು ನಾಣ್ನುಡಿ. ಆದರೆ ಈಗೀಗ ಇಂಥಾ ಪುಟ್ಟ ಪುಟ್ಟ ಜಗಳಗಳೇ ವಿಚ್ಛೇದನ, ಆತ್ಮಹತ್ಯೆ ಅಥವಾ ಕೊಲೆಗಳಿಗೆ ಕಾರಣವಾಗುತ್ತದೆ.
ದಾಂಪತ್ಯದಲ್ಲಿ ಇಬ್ಬರ ನಡುವೆ ಸಾಮರಸ್ಯದ ಕೊರತೆ ಮತ್ತು ಪರಸ್ಪರ ಅರ್ಥೈಸಿ
ಕೊಳ್ಳುವುದರಲ್ಲಿ ಎಡವಿರುವುದೇ ಬಹುತೇಕ ವಿರಸಗಳಿಗೆ ಕಾರಣ. ದಾಂಪತ್ಯದಲ್ಲಿ ಒಂದು ಪುಟ್ಟ ಒಡಕು ಮೂಡಿದರೆ ಸಾಕು , ಅಲ್ಲಿ ಸಂಶಯದ ಭೂತ ಧುತ್ತನೆ ಮೇಲೇಳುತ್ತದೆ. ಪ್ರತಿಯೊಂದನ್ನೂ ಸಂಶಯದಿಂದ ನೋಡುವ ಮನಸ್ಥಿತಿ ಇಬ್ಬರಲ್ಲೂ ಬಂದರೆ ಮುಗೀತು..ಆ ದಾಂಪತ್ಯದ ಸುಖ ಅಲ್ಲೇ ಇಲ್ಲವಾಗುತ್ತದೆ. ದಾಂಪತ್ಯದಲ್ಲಿ ಇಂಥದೆಲ್ಲಾ ಇದ್ದದ್ದೇ ಎಂದು ಸುಮ್ಮನೆ ಕೂರುವ ಬದಲು ಕೆಲವೊಂದು ಸೂತ್ರಗಳನ್ನು ಪಾಲಿಸಿದರೆ, ಪುಟ್ಟ ಪುಟ್ಟ ಜಗಳನ್ನು ದೂರವಿರಿಸಿ ನೆಮ್ಮದಿಯಾಗಿರಬಹುದು.
ಇದಕ್ಕೆ ನೀವೇನು ಮಾಡಬೇಕು ಗೊತ್ತಾ?
Advertisement