
ಇತ್ತೀಚೆಗೆ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಹೆಚ್ಚಾಗುತ್ತಿದೆ. ಆದರೆ, ಇಂತಹ ದಾಳಿಗೆ ಒಳಗಾದ ಮಹಿಳೆಯರು ಮಾನಸಿಕವಾಗಿ ಕುಗ್ಗುತ್ತಾ, ಬದುಕೇ ಮುಗಿದು ಹೋಯಿತು ಎಂಬ ಚಿಂತೆಯಲ್ಲಿ ಬಿದ್ದು, ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ಇಂತಹ ಮಹಿಳೆಯರಿಗೆ ಬೆನ್ನುಲುಬಾಗಿ ಮಹಿಳಾ ಆಯೋಗ ನಿಂತಿದೆ. ದೌರ್ಜನ್ಯ ಪ್ರಕರಣಗಳೂ ಹೆಚ್ಚಾಗುತ್ತಿವೆ ಎಂದು ಮಹಿಳೆ ಕುಗ್ಗಬಾರದು, ಅದರ ವಿರುದ್ಧ ದನಿ ಎತ್ತಿ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕು ಎಂದು ಹೇಳುವ ಆಯೋಗ, ಆಕೆಗೆ ತನ್ನ ಹಕ್ಕು ಕುರಿತು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದೆ.
ದೈಹಿಕ ಹಿಂಸೆಗೆ ಒಳಗಾದ ಮಹಿಳೆಗೆ ಸುರಕ್ಷಾ ಯೋಜನೆ
ಆ್ಯಸಿಡ್ ದಾಳಿಯ ಕಾರಣಗಳು ಯಾವುದೇ ಇರಲಿ, ಇದರ ಸತ್ಯಾಸತ್ಯತೆ ರುಜುವಾತು ಆಗಲಿ ಅಥವಾ ಆಗದೇ ಇರಲಿ, ಈ ಯೋಜನೆಯಲ್ಲಿ ಆ್ಯಸಿಡ್ ದಾಳಿಯ ಪರಿಣಾಮಕ್ಕನುಗುಣವಾಗಿ ಪರಿಹಾರ ಲಭ್ಯವಿರುತ್ತದೆ.
ಅರ್ಹತೆ
ಈ ಯೋಜನೆಯಡಿಲ್ಲಿ ಅರ್ಹತೆ ಹೊಂದಲು ಮಹಿಳೆಯರು, ಆ್ಯಸಿಡ್ ದಾಳಿಗೆ ಒಳಗಾಗಿರಬೇಕು, ಹುಡುಗಿ ಅಥವಾ ಮಹಿಳೆಯಾಗಿರಬೇಕು, ಭಾರತದ ಪ್ರಜೆಯಾಗಿರಬೇಕು.
ಅನರ್ಹತೆ
Advertisement