ಕೊಹಿನೂರು ವಜ್ರ ಭಾರತಕ್ಕೆ ವಾಪಸ್ ನೀಡಿ: ಕೀತ್ ವಾಜ್

ಜಗತ್ಪ್ರಸಿದ್ಧ ಕೊಹಿ ನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಭಾರತ ಮೂಲದ ಬ್ರಿಟಿಷ್ ಸಂಸದ ಕೀತ್ ವಾಜ್ ಕರೆ ನೀಡಿದ್ದಾರೆ...
ಕೊಹಿನೂರ್ ವಜ್ರ
ಕೊಹಿನೂರ್ ವಜ್ರ
Updated on

ಲಂಡನ್: ಜಗತ್ಪ್ರಸಿದ್ಧ ಕೊಹಿ ನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಭಾರತ ಮೂಲದ ಬ್ರಿಟಿಷ್ ಸಂಸದ ಕೀತ್ ವಾಜ್ ಕರೆ ನೀಡಿದ್ದಾರೆ. ಭಾರತದ ಪ್ರಧಾನಿ ಬ್ರಿಟನ್ ಗೆ ಭೇಟಿ ನೀಡಲಿದ್ದು ಆ ಸಮಯದಲ್ಲಿ ವಜ್ರ ಹಿಂದಿರುಗಿಸ ಬೇಕೆಂದು ಹೇಳಿದ್ದಾರೆ. ಇತ್ತೀಚೆಗೆ ಸಂಸದ ಶಶಿ ತರೂರ್ ಆಕ್ಸ್ ಫರ್ಡ್ ಯೂನಿಯನ್‍ನಲ್ಲಿ ಮಾಡಿದ ಭಾಷಣದಲ್ಲಿ ``200 ವರ್ಷ ಭಾರತವನ್ನು ಆಳಿದ ಬ್ರಿಟಿಷರು ಅಂದು ಮಾಡಿದ ಹಾನಿಯನ್ನು ತುಂಬಿಕೊಡಬೇಕು'' ಎಂದಿದ್ದರು. ಆ ಮಾತುಗಳಿಗೆ ಸಹಮತ ವ್ಯಕ್ತ ಪಡಿಸಿರುವ ವಾಜ್, ತರೂರ್ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸ ಬೇಕು ಎಂದಿದ್ದಾರೆ.

ಹಣದ ಮೂಲಕ ನಷ್ಟ ಭರ್ತಿ ಮಾಡಿ ಕೊಡಲು ಸಾಧ್ಯವಿಲ್ಲವಾದರೂ, ಕೊಹಿನೂರ್ ವಜ್ರ ವಾಪಸ್ ನೀಡುವ ಮೂಲಕ ನಷ್ಟ ಭರಿಸಿಕೊಡದಿರಲು ಕಾರಣಗಳಿಲ್ಲ. ಈ ಮಾತನ್ನು ಹಲವು ವರ್ಷ ಗಳಿಂದ ಹೇಳುತ್ತಾ ಬಂದಿದ್ದೇನೆ'' ಎಂದಿರುವ ವಾಜ್, ಮೋದಿ ಮತ್ತು ಕ್ಯಾಮರೂನ್ ಭೇಟಿಯಾದಾಗ ಕೊಹಿನೂರ್ ವಜ್ರವನ್ನು ಭಾರತಕ್ಕೆಮರಳಿಸಿಗರೆ  ಅದೊಂದು ಐತಿಹಾಸಿಕ ಕ್ಷಣವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com