ಇಸ್ಲಾಂ ಗೆ ಅವಮಾನ ಮಾಡಿದ ಆರೋಪ: ಇಬ್ಬರು ಹಿಂದೂ ಶಿಕ್ಷಕರಿಗೆ ಸೆರೆವಾಸ

ಪ್ರವಾದಿ ಮಹಮದ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಇಬ್ಬರು ಹಿಂದೂ ಶಿಕ್ಷಕರುಗಳಿಗೆ ದಕ್ಷಿಣ ಬಾಂಗ್ಲಾ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಢಾಕಾ: ಪ್ರವಾದಿ ಮಹಮದ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಇಬ್ಬರು ಹಿಂದೂ ಶಿಕ್ಷಕರುಗಳಿಗೆ ದಕ್ಷಿಣ ಬಾಂಗ್ಲಾ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಬಾಂಗ್ಲಾ ದೇಶದ ಬಗೇರತ್ ಜಿಲ್ಲೆಯ ಹೈಜ್ಲಾ ಶಾಲೆಯಲ್ಲಿ ಶಿಕ್ಷಕರು ವಿಜ್ಞಾನ ತರಗತಿಯಲ್ಲಿ ಕುರಾನ್ ಹಾಗೂ ಅಲ್ಲಾ ಹೆಸರು ಹೇಳಿದರೇ ಯಾವ ಸ್ವರ್ಗವೂ ಪ್ರಾಪ್ತಿಯಾಗುವುದಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ವಿದ್ಯಾರ್ಥಿಗಳು ದೂರು ದಾಖಲಿಸಿದ್ದರು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದಾರೆ.

ಇದರಿಂದ ಆಕ್ರೋಶ ಗೊಂಡ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಹಿಂದೂ ಶಿಕ್ಷಕರು ವಾಸವಿದ್ದ ಪ್ರದೇಶಕ್ಕೆ ನುಗ್ಗಿ ಹಲ್ಲೆ ನಡೆಸಲು ಮುಂದಾಗಿದ್ದರು. ಪೊಲೀಸರು ಬರುವವರೆಗೂ ಗೃಹ ಬಂಧನದಲ್ಲಿರಿಸಿದ್ದರು.

ನಂತರ ಪೊಲೀಸರ ಮದ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿಸಿದರು. ಇಬ್ಬರು ಶಿಕ್ಷಕರು ಕ್ಷಮೆ ಕೋರಿದ್ದಾರೆ. ಇಬ್ಬರು ಶಿಕ್ಷಕರಿಗೂ ಆರು ತಿಂಗಳು ಜೈಲು ಶಿಕ್ಷೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com