ಗಡಿನಿಯಂತ್ರಣ ರೇಖೆಯಲ್ಲಿ 11 ಮಂದಿ ಭಾರತೀಯ ಯೋಧರನ್ನು ಕೊಂದಿದ್ದೇವೆ: ಪಾಕಿಸ್ತಾನ

ಗಡಿನಿಯಂತ್ರಣ ರೇಖೆಯಲ್ಲಿ 11 ಮಂದಿ ಭಾರತೀಯ ಯೋಧರನ್ನು ಕೊಂದಿರುವುದಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇಸ್ಲಮಾಬಾದ್: ಗಡಿನಿಯಂತ್ರಣ ರೇಖೆಯಲ್ಲಿ 11 ಮಂದಿ ಭಾರತೀಯ ಯೋಧರನ್ನು ಕೊಂದಿರುವುದಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಶಾರೀಫ್ ಘೋಷಿಸಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ 7 ಮಂದಿ ಪಾಕ್ ಸೈನಿಕರು ಹತ್ಯೆಯಾದ ದಿನ ಪಾಕಿಸ್ತಾನ ಸೇನೆ ಕೂಡ ಭಾರತದ 11 ಮಂದಿ ಸೈನಿಕರನ್ನು ಕೊಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗಡಿಯಲ್ಲಿ ನಮ್ಮ ದೇಶದ 7 ಮಂದಿ ಸೈನಿಕರು ಹುತಾತ್ಮರಾದಾಗ ನಾವು  ಕನಿಷ್ಠ 11 ಮಂದಿ ಭಾರತೀಯ ಸೈನಿಕರನ್ನ ಕೊಂದಿದ್ದೇವೆ. ಪಾಕಿಸ್ತಾನ ಇತ್ತೀಚೆಗೆ ಸುಮಾರು 44 ಭಾರತೀಯ ಸೈನಿಕರನ್ನು ಕೊಂದು ಹಾಕಿದೆ . ಆದರೇ ಭಾರತ ಮಾತ್ರ ಇದನ್ನು ಒಪ್ಪಿಕೊಳ್ಳದೇ ಸುಮ್ಮನೆ ಧೈರ್ಯ ಪ್ರದರ್ಶನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆ ತನಗಾದ ನಷ್ಟವನ್ನ ಒಪ್ಪಿಕೊಳ್ಳುತ್ತಿಲ್ಲ. ಪಾಕಿಸ್ತಾನ ಸೇನೆ ವೃತ್ತಿಪರವಾದ ಸೇನಾಪಡೆ ಹೊಂದಿದೆ ಎಂದು ಈ ತಿಂಗಳಲ್ಲಿ ನಿವೃತ್ತರಾಗುತ್ತಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಶರೀಫ್ ಹೇಳಿದ್ದಾರೆ. ಆಕ್ರಮಣಕಾರಿ ಕ್ರಮಗಳಿಗೆ ಪ್ರತಿಯಾದ ಫಲಿತಾಂಶ ಇರುತ್ತದೆ ಎಂದು ಅವರು ನರೇಂದ್ರ ಮೋದಿಗೆ ಸಂದೇಶ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com