ಗಡಿನಿಯಂತ್ರಣ ರೇಖೆಯಲ್ಲಿ 11 ಮಂದಿ ಭಾರತೀಯ ಯೋಧರನ್ನು ಕೊಂದಿದ್ದೇವೆ: ಪಾಕಿಸ್ತಾನ

ಗಡಿನಿಯಂತ್ರಣ ರೇಖೆಯಲ್ಲಿ 11 ಮಂದಿ ಭಾರತೀಯ ಯೋಧರನ್ನು ಕೊಂದಿರುವುದಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್: ಗಡಿನಿಯಂತ್ರಣ ರೇಖೆಯಲ್ಲಿ 11 ಮಂದಿ ಭಾರತೀಯ ಯೋಧರನ್ನು ಕೊಂದಿರುವುದಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಶಾರೀಫ್ ಘೋಷಿಸಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ 7 ಮಂದಿ ಪಾಕ್ ಸೈನಿಕರು ಹತ್ಯೆಯಾದ ದಿನ ಪಾಕಿಸ್ತಾನ ಸೇನೆ ಕೂಡ ಭಾರತದ 11 ಮಂದಿ ಸೈನಿಕರನ್ನು ಕೊಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗಡಿಯಲ್ಲಿ ನಮ್ಮ ದೇಶದ 7 ಮಂದಿ ಸೈನಿಕರು ಹುತಾತ್ಮರಾದಾಗ ನಾವು  ಕನಿಷ್ಠ 11 ಮಂದಿ ಭಾರತೀಯ ಸೈನಿಕರನ್ನ ಕೊಂದಿದ್ದೇವೆ. ಪಾಕಿಸ್ತಾನ ಇತ್ತೀಚೆಗೆ ಸುಮಾರು 44 ಭಾರತೀಯ ಸೈನಿಕರನ್ನು ಕೊಂದು ಹಾಕಿದೆ . ಆದರೇ ಭಾರತ ಮಾತ್ರ ಇದನ್ನು ಒಪ್ಪಿಕೊಳ್ಳದೇ ಸುಮ್ಮನೆ ಧೈರ್ಯ ಪ್ರದರ್ಶನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆ ತನಗಾದ ನಷ್ಟವನ್ನ ಒಪ್ಪಿಕೊಳ್ಳುತ್ತಿಲ್ಲ. ಪಾಕಿಸ್ತಾನ ಸೇನೆ ವೃತ್ತಿಪರವಾದ ಸೇನಾಪಡೆ ಹೊಂದಿದೆ ಎಂದು ಈ ತಿಂಗಳಲ್ಲಿ ನಿವೃತ್ತರಾಗುತ್ತಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಶರೀಫ್ ಹೇಳಿದ್ದಾರೆ. ಆಕ್ರಮಣಕಾರಿ ಕ್ರಮಗಳಿಗೆ ಪ್ರತಿಯಾದ ಫಲಿತಾಂಶ ಇರುತ್ತದೆ ಎಂದು ಅವರು ನರೇಂದ್ರ ಮೋದಿಗೆ ಸಂದೇಶ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com