ಸ್ವಾಮಿ ನಾರಾಯಣ ದೇವಾಲಯದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಪೂಜೆ ಸಲ್ಲಿಸಿದ ಕೆನಡಾ ಪ್ರಧಾನಿ

ಕೆನಡಾದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿ 10 ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಪೂಜೆ ಸಲ್ಲಿಸಿದ್ದಾರೆ.
ಕೆನಡಾ ಪ್ರಧಾನಿ
ಕೆನಡಾ ಪ್ರಧಾನಿ
ಟೋರಂಟೋ: ಕೆನಡಾದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿ 10 ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಪೂಜೆ ಸಲ್ಲಿಸಿದ್ದಾರೆ. 
ದೇವಾಲಯವನ್ನು ವಾಸ್ತುಶಿಲ್ಪದ ಮೇರುಕೃತಿ ಎಂದು ಬಣ್ಣಿಸಿರುವ ಜಸ್ಟಿನ್ ಟ್ರುಡೊ, ದೇವಾಲಯವನ್ನು ಕೋಮುಸೌಹಾರ್ದಕ್ಕೆ ಅತ್ಯುತ್ತಮ ಪ್ರದೇಶ ಎಂದು ಹೇಳಿದ್ದಾರೆ. ಕುರ್ತಾ ಹಾಗೂ ಪೈಜಾಮ ಧರಿಸಿ ಟ್ರುಡೊ ಪೂಜೆ ಸಲ್ಲಿಸಿದ್ದು, ಭಾರತದ ಮಾಜಿ ವಿದೇಶಾಂಗ ಇಲಾಖೆಯ ಮಾಜಿ ವಕ್ತಾರ (ಎಂಇಎ) ಹಾಗೂ ಕೆನಡಾದ ಭಾರತೀಯ ರಾಯಭಾರಿ ವಿಕಾಸ್ ಸ್ವರೂಪ್ ಸಹ ಭಾಗವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com