ಪಾಕ್ಗೆ ವಾಪಸ್ ಆಗಿರುವ ಅಬ್ದುಲ್ಲಾಗೆ ಮನೆ ಹಾಗೂ ನೆರೆಹೊರೆಯವರಿಂದ ಆಧರದ ಸ್ವಾಗತ ಸಿಕ್ಕಿದೆ. ಇದೇ ವೇಳೆ ಸ್ಥಳೀಯ ಮಾಧ್ಯಮಕ್ಕೆ ಮಾತನಾಡಿರುವ ಆತ, ಶಾರುಖ್ ಅವರನ್ನು ಭೇಟಿ ಮಾಡಲು ನಾನು ಭಾರತಕ್ಕೆ ಹೋಗಿದ್ದೆ. ಆದರೆ, ಅಲ್ಲಿ ಜೈಲಿನ ಪಾಲಾಗಬೇಕಾಯಿತು. ಜೈಲಿನ ಅಧಿಕಾರಿಗಳ ಸಹಕಾರದೊಂದಿಗೆ ಶಾರುಖ್ ಹಾಗೂ ಕಾಜೋಲ್ ಭೇಟಿಗೆ ಭಾರತ ಸರ್ಕಾರಕ್ಕೆ ಪತ್ರ ಬರೆದೆ. ಆದರೆ, ಇದಕ್ಕೆ ಯಾವುದೇ ಉತ್ತರ ಬರಲಿಲ್ಲ ಎಂದಿದ್ದಾರೆ.