ಮಾಜಿ ಅಧ್ಯಕ್ಷ ಮಹಮ್ಮದ್ ನಶೀದ್ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ವಿವಿಧ ರಾಜಕೀಯ ಗಣ್ಯರನ್ನು ಬಿಡುಗಡೆ ಮಾಡುವಂತೆ ಕಳೆದ ವಾರ ಸುಪ್ರೀಂಕೋರ್ಟ್'ಗೆ ಆದೇಶಿಸಿತ್ತು. ಜೊತೆಗೆ ವಿಪಕ್ಷಗಳ 12 ಸಂಸದರ ಸದಸ್ಯತ್ವ ವಜಾ ಮಾಡಿದ್ದ ಸರ್ಕಾರದ ಆದೇಶವನ್ನೂ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೆ ಬಹುಮತ ಬಂದಿತ್ತು. ಸುಪ್ರೀಂಕೋರ್ಟ್'ನ ಈ ತೀರ್ಪು ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರಿಗೆ ಭಾರೀ ಮುಖ ಭಂಗ ಉಂಟು ಮಾಡಿತ್ತು. ಹೀಗಾಗಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಾರೆ.