ಕೆನಡಾದ ಮಣ್ಣಿನಲ್ಲಿ ಸಿಖ್ ಪ್ರತ್ಯೇಕತಾವಾದಿ ಚಟುವಟಿಕೆಗಳು ನಡೆಯುತ್ತಿರುವ ವಿಷಯದಲ್ಲಿ, ಕೆನಡಾ ಪ್ರಧಾನಿಯನ್ನು ಮುಜುಗರಕ್ಕೆ ಗುರಿಪಡಿಸಲು ಭಾರತದ ‘ಕಪಟ’ ಶಕ್ತಿಗಳು ಈ ಘಟನೆಯನ್ನು ಏರ್ಪಡಿಸಿವೆ ಎಂದು ಕೆನಡಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಡೇನಿಯಲ್ ಜೀನ್ ಆರೋಪಿಸಿದ್ದರು. ಈ ಬಗ್ಗೆ ಕೆನಡಾದ ರಾಜಕೀಯ ಪಕ್ಷಗಳು ಸಂಸತ್ತಿನ ಹೌಸ್ ಆಫ್ ಕಾಮನ್ಸ್ನಲ್ಲಿ ಪ್ರಸ್ತಾಪಿಸಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳುತ್ತಿರುವ ‘ಪಿತೂರಿ ಸಿದ್ಧಾಂತ’ವನ್ನು ಟ್ರುಡೋ ಒಪ್ಪುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದವು.