ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ರಘುನಂದನ್ ಜೂಜಿನ ದಾಸನಾಗಿದ್ದ. ಹಣಕ್ಕಾಗಿ ತನ್ನ ಸ್ನೇಹಿತನ ಮಗುವನ್ನು ಅಪಹರಿಸುವ ಸಂಚು ಹೂಡಿ ಯಾರೂ ಇಲ್ಲದ ವೇಳೆಯಲ್ಲಿ ಅವನ ಮನೆಯೊಳಗೆ ನುಸುಳಿದ್ದ. ಆದರೆ, ಮನೆಯಲ್ಲಿ ಸ್ನೇಹಿತನ ತಾಯಿ ಸತ್ಯಾರ್ಥಿ ವೆನ್ನಾ(61) ಇದ್ದುದರಿಂದ ಅಪಹರಣದ ಯತ್ನ ವಿಫಲವಾಗಿತ್ತು. ಹಣ ಸಿಗದ ಹತಾಶೆಯಿಂದ ರಘುನಂದನ್ ಸತ್ಯಾರ್ಥಿ ವೆನ್ನಾ ಹಾಗು 10 ತಿಂಗಳ ಮಗು ಸಾನ್ವಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.