ಶನಿವಾರ ಬೆಳಗ್ಗೆ ರಸ್ತೆ ಬದಿ ನಡೆದು ಹೋಗುತ್ತಿದ್ದ ಹುಡುಗನನ್ನು ಪೊಲೀಸರು ವಿಚಾರಿಸಿ ಆತನಿಗೆ ಉಪಾಹಾರ ನೀಡಿ ಕಚೇರಿಗೆ ಮುಟ್ಟಿಸಿದ್ದರು. ಕಚೇರಿಗೆ ತಲುಪಿದ ನಂತರ ಈತನ ಕಥೆ ಕೇಳಿದ ಅಧಿಕಾರಿಗಳು ಅಚ್ಚರಿಪಟ್ಟಿದ್ದರು. ಹಾಗೂ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪದ ವಾಲ್ಟರ್ ಕರ್ತವ್ಯಕ್ಕೆ ಹಾಜರಾಗಿದ್ದರು.